ಸಿರವಾರ ಜೂ 11 :: ಸಿರವಾರ ತಹಸೀಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಕ.ರ.ವೇ ಪ್ರವೀಣ್ ಶಟ್ಟಿ ಬಣವು ಬೆಂಗಳೂರು ಪೊಲೀಸ ಆಯುಕ್ತ ದಯಾನಂದ ಹಾಗೂ ಪೊಲೀಸ್ ಅಧಿಕಾರಿಗಳ ಅಮಾನತು ಖಂಡಿಸಿ ಸಿರವಾರ ತಾಲೂಕು ಘಟಕದಿಂದ ಖಾಜನಗೌಡರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು ಬೆಂಗಳೂರು ಪೊಲೀಸ ಆಯುಕ್ತರಾದ ದಯಾನಂದ ಹಾಗೂ ಪೊಲೀಸ್ ಅಧಿಕಾರಿಗಳನ್ನು ಕಾಂಗ್ರೆಸ್ ಸರ್ಕಾರ ಅಮಾನತು ಮಾಡಿರುವುದು ಖಂಡನೀಯ ಅವರ ಅಮಾನತು ವಾಪಸ್ ಪಡೆಯಬೇಕೆಂದು ಖಾಜನಗೌಡರ ನೇತೃತ್ವದಲ್ಲಿ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದ್ದರು.

