Monday, October 13, 2025
Homeಚುನಾವಣೆ 2023ಕಾಂಗ್ರೆಸ್ ಬಾವುಟ ಹಿಡಿದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್

ಕಾಂಗ್ರೆಸ್ ಬಾವುಟ ಹಿಡಿದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್

ಬೆಂಗಳೂರು: ಬಿಜೆಪಿ ಬಿಟ್ಟ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಡೆಗೂ ಕಾಂಗ್ರೆಸ್ ಮನೆ ಸೇರಿದ್ದಾರೆ. ಕೆಪಿಸಿಸಿ ಸಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಜಗದೀಶ್‌ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಗೊಂಡ್ರು.

ಕಾಂಗ್ರೆಸ್ ಪಕ್ಷದ ಶಾಲು ತೊಡಿಸಿ, ಬಾವುಟ ನೀಡಿ ಶೆಟ್ಟರ್‌ರವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯ್ತು. ಕಾರ್ಯಕ್ರಮಲ್ಲಿ ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ್‌ ಉಪಸ್ಥಿತರಿದ್ರು

ಇದಕ್ಕೂ ಮುನ್ನ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆನರಾಜಿನಾಮೆಯನ್ನೂ ಜಗದೀಶ್‌ ಶೆಟ್ಟರ್ ಸಲ್ಲಿಸಿದ್ರು. ಭಾನುವಾದ ಸ್ಪೀಕರ್‌ ಕಗೇರಿ ನಿವಾಸಕ್ಕೆ ತೆರಳಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು

ಹೆಚ್ಚಿನ ಸುದ್ದಿ