Monday, March 2, 2026
Homeಟಾಪ್ ನ್ಯೂಸ್ಕರ್ನಾಟಕ ಚುನಾವಣೆ: ಬಿಜೆಪಿ ಹಾಗೂ ಜೆಡಿಎಸ್‌ಗೆ ಗುಡ್‌ಬೈ ಎಂದ ನಾಯಕರು

ಕರ್ನಾಟಕ ಚುನಾವಣೆ: ಬಿಜೆಪಿ ಹಾಗೂ ಜೆಡಿಎಸ್‌ಗೆ ಗುಡ್‌ಬೈ ಎಂದ ನಾಯಕರು

ಬೆಂಗಳೂರು : ಚುನಾವಣೆ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. ಬಿಜೆಪಿ ಹಾಗೂ ಜೆಡಿಎಸ್‌ನ ಹಲವು ನಾಯಕರು ತಮ್ಮ ಪಕ್ಷಗಳಿಗೆ ಗುಡ್‌ ಬೈ ಹೇಳಿ ಕಾಂಗ್ರೆಸ್‌ನತ್ತ ಮುಖ ಮಾಡುತ್ತಿದ್ದಾರೆ.

ಕೂಡ್ಲಿಗಿ ಬಿಜೆಪಿ ಶಾಸಕ ಎನ್‌.ವೈ ಗೋಪಾಲಕೃಷ್ಣ ಇಂದು ಬಿಜೆಪಿಗೆ ವಿದಾಯ ಹೇಳಿದ್ದಾಋಎ. ಸ್ಪೀಕರ್‌ ಕಾಗೇರಿಯವರಿಗೆ ರಾಜಿನಾಮೆ ಸಲ್ಲಿಸಿ ಶಾಸಕಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ ರಾಜಿನಾಮೆ ಸಲ್ಲಿಕೆ

ಇತ್ತ ಜೆಡಿಎಸ್‌ ಶಾಸಕ ಎ.ಟಿ ರಾಮಸ್ವಾಮಿ ಕೂಡಾ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಹಾಸನದ ಅರಕಲಗೂಡು ಶಾಸಕರಾಗಿದ್ದ ರಾಮಸ್ವಾಮಿ ಇಂದು ಸ್ಪೀಕರ್ ಕಚೇರಿಗೆ ತೆರಳಿ ರಾಜಿನಾಮೆ ಸಲ್ಲಿಸಿದ್ದಾರೆ. ಬೆಂಲಿಗರೊಂದಿಗೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿರುವ ಎ.ಟಿ ರಾಮಸ್ವಾಮಿ ಕಾಂಗ್ರೆಸ್‌ ಸೇರುತ್ತಾರೆ ಎನ್ನಲಾಗುತ್ತಿದೆ

ಹೆಚ್ಚಿನ ಸುದ್ದಿ