ದಾವಣಗೆರೆ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಬಸವಪ್ರಭು ಶರ್ಮ ಹಾಗೂ ರಾಜೇಶ್ ಎಸ್.ಕೆ ಫೈರ್ಮ್ಯಾನ್, ಲೋಕಾಯುಕ್ತದ ಖೆಡ್ಡಾಗೆ ಬಿದ್ದಿದ್ದಾರೆ. ದಾವಣಗೆರೆಯ ತಮ್ಮ ಕಾರ್ಯಾಲಯದಲ್ಲಿ ಹರಿಹರ ನಗರ ವಾಸಿ ಡಿ.ಜಿ ರಘುನಾಥ್, ಛೇರ್ಮನ್ ಶ್ರೀದುರುಗೋಜಿ ಗೋಪಾಲ್ರಾವ್, ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ , ಹರಿಹರ ಇವರಿಗೆ ತಮ್ಮ ವಿಧ್ಯಾವಾಹಿನಿ ಶಾಲೆಗೆ ಅಗ್ನಿಶಾಮಕ ಎನ್ಓಸಿ ನೀಡಲು ಒಂದು ಡೆಲ್ ಕಂಪನಿಯ ಲ್ಯಾಪ್ಟಾಪ್ ಕೊಡುವಂತೆ ಲಂಚದ ಬೇಡಿಕೆ ಇಟ್ಟದ್ದರಂತೆ. ಈ ಕುರಿತು ಲೋಕಾಯುಕ್ತ ಠಾಣೆಯಲ್ಲಿ ಮೊ. ಸಂಖ್ಯೆ: 9/2023 ಕಲಂ 7 ( ಎ ) ಭ್ರಷ್ಟಚಾರ ತಡೆ ಕಾಯ್ದೆ 1988, ತಿದ್ದುಪಡಿ ಕಾಯ್ದೆ 2018 ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಈ ಬಗ್ಗೆ ದಾವಣಗೆರೆ ಲೊಕಾಯುಕ್ತ ಅಧಿಕಾರಿಗಳಿಗೆ ರಘುನಾಥ್ ದೂರು ನೀಡಿದ್ದರು. ರಘುನಾಥ್ ಸಹಾಯದಿಂದ ಲಂಚ ಕೊಡುವಾಗ ಲೊಕಾಯುಕ್ತ ಅಧಿಕಾರಿಗಳು ಟ್ರಾಪ್ ಮಾಡಿದ್ದಾರೆ. ಅಗ್ನಿಶಾಮಕ ದಳದ ಇಬ್ಬರು ಅಧಿಕಾರಿಗಳ ಮೇಲೆ ಲೊಕಾಯುಕ್ತ ಇಲಾಖೆಯಲ್ಲಿ ಪ್ರಕರಣ ದಾಖಲಿಸಲಾಗಿದೆ