Saturday, June 27, 2026
Homeಟಾಪ್ ನ್ಯೂಸ್ಸರ್ಕಾರ ಕೆಡವಿದ್ದಕ್ಕೆ 'ಹಳ್ಳಿಹಕ್ಕಿ' ಪಶ್ಚಾತ್ತಾಪ ಸತ್ಯಾಗ್ರಹ

ಸರ್ಕಾರ ಕೆಡವಿದ್ದಕ್ಕೆ ‘ಹಳ್ಳಿಹಕ್ಕಿ’ ಪಶ್ಚಾತ್ತಾಪ ಸತ್ಯಾಗ್ರಹ

ಮೈಸೂರು: ಸಮ್ಮಿಶ್ರ ಸರ್ಕಾರ ಉರುಳಲು ಕಾರಣವಾದ 17 ಶಾಸಕರಲ್ಲಿ ಒಬ್ಬರಾದ ಹೆಚ್ ವಿಶ್ವನಾಥ್ ಇದೀಗ ವಿನೂತನ ಸತ್ಯಾಗ್ರಹ ನಡೆಸುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಸರ್ಕಾರ ಬರಲು ಕಾರಣವಾಗಿರುವುದಕ್ಕೆ ಪಶ್ಚಾತ್ತಾಪ ಪಟ್ಟು ವಿಶ್ವನಾಥ್ ತಮ್ಮ ಬೆಂಬಲಿಗರೊಡನೆ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಮೈಸೂರು ನ್ಯಾಯಾಲಯದ ಮಹಾತ್ಮ ಗಾಂಧಿ ಪುತ್ಥಳಿ ಬಳಿ ಪರಿಷತ್‌ ಸದಸ್ಯ ಎಚ್‌ ವಿಶ್ವನಾಥ್ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾಗಿ, ಜನವಿರೋಧಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟ ಕೊರಗು ತನ್ನನ್ನು ಕಾಡುತ್ತಿದ್ದು, ಅದಕ್ಕಾಗಿ ಈ ಸತ್ಯಾಗ್ರಹ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಹೆಚ್ಚಿನ ಸುದ್ದಿ