Saturday, October 11, 2025
Homeಚುನಾವಣೆ 2023ಇನ್ಮೇಲೆ ನಂದೇ ಹವಾ: ಡಿಕೆಶಿಗೆ ಆರ್‌ ಅಶೋಕ್‌ ಟಾಂಗ್

ಇನ್ಮೇಲೆ ನಂದೇ ಹವಾ: ಡಿಕೆಶಿಗೆ ಆರ್‌ ಅಶೋಕ್‌ ಟಾಂಗ್

ಕನಕಪುರದಲ್ಲಿ ಡಿಕೆ ಶಿವಕುಮಾರ್‌ ವಿರುದ್ಧ ಸಚಿವ ಆರ್‌ ಅಶೋಕ್‌ ರನ್ನು ಬಿಜೆಪಿ ಕಣಕ್ಕಿಳಿಸಿದೆ. ಅಶೋಕ್‌ ಈಗಾಗಲೇ ತಮ್ಮ ಚುನಾವಣಾ ಪ್ರಚಾರ ಕಾರ್ಯವನ್ನು ಆರಂಭಿಸಿದ್ದು, ಡಿಕೆ ಶಿವಕುಮಾರ್‌ ಗೆ ಟಾಂಗ್‌ ನೀಡಲು ಶುರು ಮಾಡಿದ್ದಾರೆ.

ಬೆಂಗಳೂರು ‌ದಕ್ಷಿಣ ತಾಲೂಕಿನ ಕಗ್ಗಲಿಪುರ ‌ಗ್ರಾಮದಲ್ಲಿ ನಡೆದ ಕನಕಪುರ ಬಿಜೆಪಿ ಮುಖಂಡರ ಸಭೆಯಲ್ಲಿ ಮಾತನಾಡಿರುವ  ಸಚಿವ ಆರ್​. ಅಶೋಕ್‌ ಅವರು ಡಿಕೆ ಶಿವಕುಮಾರ್‌ ವಿರುದ್ಧ ಸಿನಿಮೀಯ ಡೈಲಾಗ್‌ ಹೊಡೆದಿದ್ದು, “ನಾ ಬರೋವರೆಗೂ ಮಾತ್ರ ನಿನ್ನ ಹವಾ, ನಾ ಬಂದ್ಮೇಲೆ ನಂದೇ ಹವಾ” ಎಂದು ಹೇಳಿದ್ದಾರೆ.

ಕನಕಪುರ ಬಂಡೆ ಹೋಗಿ ಹೃದಯವಂತರ ತಾಲೂಕು ಆಗಬೇಕು. ಕನಕಪುರ ಕ್ಷೇತ್ರದ ಪ್ರತಿ ಗ್ರಾಮದಲ್ಲಿ ನನ್ನ ಹೆಸರು ಹೇಳುತ್ತಿದ್ದಾರೆ ಎಂದು ಅಶೋಕ್‌ ಹೇಳಿದ್ದಾರೆ.

ಹೆಚ್ಚಿನ ಸುದ್ದಿ