Saturday, June 13, 2026
Homeರಾಜ್ಯಗ್ಯಾಸ್ ಸಿಲಿಂಡರ್ ಅನಾಹುತವನ್ನು ಸಮಯ ಪ್ರಜ್ಞೆಯಿಂದ ತಪ್ಪಿಸಿದ ಕಿರಣಗೆ ಅಭಿನಂದಿಸಿದ ಶಾಸಕ ನಾಡಗೌಡ: ಸೂಕ್ತ ಪರಿಹಾರಕ್ಕೆ...

ಗ್ಯಾಸ್ ಸಿಲಿಂಡರ್ ಅನಾಹುತವನ್ನು ಸಮಯ ಪ್ರಜ್ಞೆಯಿಂದ ತಪ್ಪಿಸಿದ ಕಿರಣಗೆ ಅಭಿನಂದಿಸಿದ ಶಾಸಕ ನಾಡಗೌಡ: ಸೂಕ್ತ ಪರಿಹಾರಕ್ಕೆ ಸೂಚನೆ

ಮುದ್ದೇಬಿಹಾಳ(ತಾಳಿಕೋಟಿ):

ಇತ್ತೀಚೆಗೆ ತಾಳಿಕೋಟಿ ಪಟ್ಟಣದಲ್ಲಿ ಸಂಭವಿಸಲಿದ್ದ ಬಾರಿ ಗ್ಯಾಸ್ ಸಿಲಿಂಡರ್ ಅನಾಹುತವನ್ನು ತಮ್ಮ ಸಮಯ ಪ್ರಜ್ಞೆ ಹಾಗೂ ಧೈರ್ಯದಿಂದ ತಪ್ಪಿಸಿದ ಕಿರಣ್ ಕೋಟಿಮನಿ ಅವರನ್ನು ಶಾಸಕ ಸಿ. ಎಸ್.ನಾಡಗೌಡ ಅಪ್ಪಾಜಿ ಅವರು ಗುರುವಾರ ಸಂಜೆ ಮನೆಗೆ ಭೇಟಿ ಮಾಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಕಿರಣ್ ಅವರಿಗೆ ಅನಾಹುತದಲ್ಲಿ ತುಂಬಾ ರೀತಿಯ ಸುಟ್ಟ ಗಾಯಗಳಾಗಿದ್ದು ಅವರಿಗೆ ಸರ್ಕಾರದಿಂದ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಾಳಿಕೋಟಿ ತಾಲೂಕಿನ ಕಾಂಗ್ರೆಸ್ ಮುಖಂಡರು, ಸ್ಥಳೀಯ ಮಾಜಿ ಜನಪ್ರತಿನಿಧಿಗಳು ಸೇರಿದಂತೆ ಯುವ ಮುಖಂಡರು ಇದ್ದರು.

ಹೆಚ್ಚಿನ ಸುದ್ದಿ