Monday, July 7, 2025
Homeಟಾಪ್ ನ್ಯೂಸ್ಕೊಂಡೋತ್ಸವದ ವೇಳೆ ಆಯತಪ್ಪಿ ಅಗ್ನಿ ಕೊಂಡಕ್ಕೆ ಬಿದ್ದ ಅರ್ಚಕ

ಕೊಂಡೋತ್ಸವದ ವೇಳೆ ಆಯತಪ್ಪಿ ಅಗ್ನಿ ಕೊಂಡಕ್ಕೆ ಬಿದ್ದ ಅರ್ಚಕ

ವೀರಭದ್ರ ಸ್ವಾಮಿಯ ಅಗ್ನಿಕೊಂಡೋತ್ಸವ ವೇಳೆ ಅಯತಪ್ಪಿ ಅರ್ಚಕನೇ ಅಗ್ನಿ ಕೊಂಡಕ್ಕೆ ಬಿದ್ದ ಘಟನೆ ಕನಕಪುರದ ನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಕ್ಷಣ ಗಾಯಾಳು ಪುಟ್ಟಸ್ವಾಮಿಯನ್ನು ಮೇಲೆತ್ತಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ದುರ್ಘಟನೆಯಿಂದ ನೆರೆದಿದ್ದ ಸಾವಿರಾರು ಭಕ್ತರು ಆತಂಕ್ಕೀಡಾಗಿದ್ದಾರೆ. ಹಲವು ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬರುತ್ತಿದ್ದು, ಇದೇ ಮೊದಲ ಬಾರಿಗೆ ಕೊಂಡೋತ್ಸವದ ವೇಳೆ ಇಂತಹ ಆಚಾತುರ್ಯ ನಡೆದಿರುವುದು ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಘಟನೆಯಲ್ಲಿ ಅರ್ಚಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹೆಚ್ಚಿನ ಸುದ್ದಿ