ಬೆಂಗಳೂರು: ಬಹು ನಿರೀಕ್ಷಿತ ಬಿಜೆಪಿ ಮೊದಲ ಪಟ್ಟಿ ಮಂಗಳವಾರ ತಡರಾತ್ರಿ ಹೊರಬಿದ್ದಿದೆ. ಗಜಪ್ರಸವದಂತೆ ವಿಳಂಬವಾಗಿದ್ದ 189 ಮಂದಿಯ ಈ ಪಟ್ಟಿಯಲ್ಲಿ ರಾಜಧಾನಿಯ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.
ಯಲಹಂಕ ಎಸ್.ಆರ್. ವಿಶ್ವನಾಥ್, ಕೆಆರ್ ಪುರ- ಬಿ.ಎ.ಬಸವರಾಜ್, ಬ್ಯಾಟರಾಯನಪುರ- ತಮ್ಮೇಶ್ ಗೌಡ, ಯಶವಂತಪುರ-ಎಸ್ ಟಿ ಸೋಮಶೇಖರ್, ರಾಜರಾಜೇಶ್ವರಿ ನಗರ- ಮುನಿರತ್ನ ನಾಯ್ಡು, ದಾಸರಹಳ್ಳಿ- ಎಸ್ ಮುನಿರಾಜು, ಮಹಾಲಕ್ಷ್ಮಿ ಲೇಔಟ್ – ಗೋಪಾಲಯ್ಯ, ಮಲ್ಲೇಶ್ವರ- ಸಿ.ಎನ್. ಅಶ್ವತ್ಥ್ ನಾರಾಯಣ್, ಪುಲಕೇಶಿನಗರ- ಮುರಳಿ ಸ್ಥಾನ ಗಿಟ್ಟಿಸಿದ್ದಾರೆ.
ಇನ್ನು ಸರ್ವಜ್ಞ ನಗರ- ಪದ್ಮನಾಭರೆಡ್ಡಿ, ಸಿವಿರಾಮನ್ ನಗರ- ಎಸ್ ರಘು, ಶಿವಾಜಿನಗರ- ಎನ್ ಚಂದ್ರ, ಶಾಂತಿನಗರ- ಶಿವಕುಮಾರ್, ಗಾಂಧಿನಗರ- ಸಪ್ತಗಿರಿಗೌಡ, ರಾಜಾಜಿನಗರ- ಸುರೇಶ್ ಕುಮಾರ್, ವಿಜಯನಗರ- ರವೀಂದ್ರ ಎಚ್, ಚಾಮರಾಜಪೇಟೆ- ಭಾಸ್ಕರ್ ರಾವ್, ಚಿಕ್ಕಪೇಟೆ- ಉದಯ್ ಗರುಡಾಚಾರ್, ಬಸವನಗುಡಿ- ರವಿಸುಬ್ರಹ್ಮಣ್ಯ, ಪದ್ಮನಾಭನಗರ- ಆರ್ ಅಶೋಕ್, ಬಿಟಿಎಂ ಲೇಔಟ್ – ಶ್ರೀಧರ್ ರೆಡ್ಡಿ, ಜಯನಗರ- ಸಿಕೆ ರಾಮಮೂರ್ತಿ, ಬೊಮ್ಮನಹಳ್ಳಿ- ಸತೀಶ್ ರೆಡ್ಡಿ, ಬೆಂಗಳೂರು ದಕ್ಷಿಣ- ಎಂ ಕೃಷ್ಣಪ್ಪ, ಆನೇಕಲ್ – ಹುಲ್ಲಳ್ಳಿ ಶ್ರೀನಿವಾಸ್ ಸ್ಥಾನ ಪಡೆದಿದ್ದಾರೆ.
ಗೋವಿಂದರಾಜ ನಗರ, ಹೆಬ್ಬಾಳ ಹಾಗೂ ಮಹದೇವಪುರ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಇನ್ನೂ ಅಂತಿಮಗೊಳಿಸಿಲ್ಲ. ಗೋವಿಂದರಾಜನಗರ ಶಾಸಕ ವಿ.ಸೋಮಣ್ಣನವರಿಗೆ ಈಗಾಗಲೇ ವರುಣಾ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ. ಪ್ರಸ್ತುತ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಹೆಸರು ಮೊದಲ ಪಟ್ಟಿಯಲ್ಲಿ ಹೊರಬಿದ್ದಿಲ್ಲ.

