Saturday, April 18, 2026
Homeಟಾಪ್ ನ್ಯೂಸ್ಕಂದಕಕ್ಕೆ ಉರುಳಿದ ಬಸ್: ಪ್ರಾಣಾಪಾಯದಿಂದ ಜನ ಪಾರು

ಕಂದಕಕ್ಕೆ ಉರುಳಿದ ಬಸ್: ಪ್ರಾಣಾಪಾಯದಿಂದ ಜನ ಪಾರು

ಸಿದ್ದಾಪುರ: ಚಾಲಕನ ನಿಯಂತ್ರಣ ತಪ್ಪಿ ಚಲಿಸುತ್ತಿದ್ದ ಬಸ್‌ ಕಂದಕಕ್ಕೆ ಉರುಳಿದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.

ಸಿದ್ದಾಪುರದ 16 ನೇ ಮೈಲಿಗಲ್ಲು ಬಳಿ ಈ ಘಟನೆ ಸಂಭವಿಸಿದ್ದು, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಒಟ್ಟು 47 ಮಂದಿ ಪ್ರಯಾಣಿಕರಲ್ಲಿ ಇಬ್ಬರಿಗೆ ಗಾಯಗಳಾಗಿದೆ ಎಂದು ವರದಿಯಾಗಿದೆ.

ಹಳಿಯಾಳದಿಂದ ಸಾಗರಕ್ಕೆ ಹೋಗುತ್ತಿದ್ದ ಬಸ್‌ನ ಸ್ಟಿಯರಿಂಗ್ ರಾಡ್‌ ತುಂಡಾದ ಪರಿಣಾಮ ಬಸ್‌ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ ಎಂದು ಸಿದ್ದಾಪರ ಪೊಲೀಸರು ತಿಳಿಸಿದ್ದಾರೆ

ಹೆಚ್ಚಿನ ಸುದ್ದಿ