Monday, April 27, 2026
Homeಚುನಾವಣೆ 2023ವರುಣಾ: ಮೊದಲ ದಿನವೇ ಸೋಮಣ್ಣರಿಗೆ ಮರ್ಮಾಘಾತ

ವರುಣಾ: ಮೊದಲ ದಿನವೇ ಸೋಮಣ್ಣರಿಗೆ ಮರ್ಮಾಘಾತ

ವರುಣಾದಲ್ಲಿ ಅನಿರೀಕ್ಷಿತವಾಗಿ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿರುವ ಸಚಿವ ಸೋಮಣ್ಣಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಕಳೆದ ಬಾರಿ ವರುಣಾದಲ್ಲಿ ಸಿದ್ದರಾಮಯ್ಯ ಎದುರು ಸ್ಪರ್ಧಿಸಿ ಸೋತಿದ್ದ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ಪಕ್ಷದ ವಿರುದ್ಧ ಬಂಡಾಯವೆದ್ದಿದ್ದಾರೆ.  

ಈ ಬಾರಿ ವರುಣಾದಿಂದ ಬಸವರಾಜು ಅವರಿಗೆ ಟಿಕೆಟ್​ ಕೈ ತಪ್ಪಿದ್ದು, ಪಕ್ಷದ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಪಕ್ಷ ತಮಗೆ ಟಿಕೆಟ್‌ ನೀಡುತ್ತದೆ ಎಂದು ಅವರು ಈಗಾಗಲೇ ಚುನಾವಣೆ ಎದುರಿಸಲು ತಯಾರಿ ನಡೆಸಿಕೊಂಡಿದ್ದರು. ಆದರೆ, ಕೊನೆ ಕ್ಷಣದಲ್ಲಿ ಸೋಮಣ್ಣ ಅವರಿಗೆ ವರುಣಾ ಟಿಕೆಟ್ ನೀಡಲಾಗಿದೆ. ಈ ಹಿನ್ನೆಲೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಅವರು ರಾಜೀನಾಮೆ ನೀಡಿದ್ದಾರೆ.

ವರುಣಾ ಕ್ಷೇತ್ರದಲ್ಲಿ ಬಿವೈ ವಿಜಯೇಂದ್ರ ನಿಂತರೆ ಬೆಂಬಲಿಸುವುದಾಗಿ ಹೇಳಿದ್ದ ಸ್ಥಳೀಯ ಟಿಕೆಟ್​ ನಾಯಕರೂ ಸೋಮಣ್ಣ ಆಗಮನದಿಂದ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಅಸಮಾಧಾನ ಶಮನ‌ಗೊಳಿಸಲು ವಿ. ಸೋಮಣ್ಣ ಮುಂದಾಗಿದ್ದು, ಕ್ಷೇತ್ರಕ್ಕೆ ಹೊರಗಿನವರು ಎಂಬುದು ಸ್ಥಳಿಯವಾಗಿ ಚರ್ಚೆ ನಡೆಯುತ್ತಿದೆ.  

ಹೆಚ್ಚಿನ ಸುದ್ದಿ