Saturday, June 6, 2026
Homeಜಿಲ್ಲಾ ಸುದ್ದಿಗಳುಕನ್ನಡ ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಾಗಲಿ: ಸುಧೀರ ನಾವದಗಿ

ಕನ್ನಡ ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಾಗಲಿ: ಸುಧೀರ ನಾವದಗಿ

ವಿಶ್ವದಲ್ಲಿ ಭಾರತ ಸುದಂರ ಸಂಸ್ಕೃತಿ ಹೊಂದಿದ ರಾಷ್ಟ್ರವಾದರೆ ನಮ್ಮ ದೇಶದಲ್ಲಿ ಕರ್ನಾಟಕ ರಾಜ್ಯ ಸಂಸ್ಕೃತೀಕ ನಲೆಬೀಡಾಗಿದೆ. ಇಂತಹ ನಾಡದಲ್ಲಿ ಜನಿಸಿರುವ ನಾವುಗಳೇ ಪುಣ್ಯವಂತರು. ಕನ್ನಡ ಭಾಷೆಗೆ ಭಾರತದಲ್ಲಿ ಉನ್ನತಮಟ್ಟದ ಸ್ಥಾನವಿದೆ ಎಂಬುವುದು ಮನಗೆಲ್ಲ ಹೆಮ್ಮೆಯ ವಿಷಯವಾಗಿದೆ ಎಂದು ಬಸವ ವಿದ್ಯಾ ಪ್ರಸಾರತ ಸಂಸ್ಥೆಯ ಅಧ್ಯಕ್ಷ ಸುಧೀರ ನಾವದಗಿ ಹೇಳಿದರು.

ಶನಿವಾರ ನಡೆದ 70ನೇ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ ಪ್ರಾರ್ಥನಾ ವಿದ್ಯಾ ಮಂದಿರ ಶಾಲೆಯ ವಾರ್ಷಿಕ ಕ್ರೀಡೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕನ್ನಡ ಅಭಿಮಾನವನ್ನು ಎತ್ತಿಹಿಡಿಯುವಲ್ಲಿ ವಿಜಯಪುರ ಜಿಲ್ಲೆ ಮುಂಚುಣಿಯಲ್ಲಿದೆ.

ಅದರಲ್ಲೂ ಮುದ್ದೇಬಿಹಾಳ ತಾಲೂಕು ದೇಶದ ವಿವಿಧಡೆಯಲ್ಲಿ ಜರುಗುವ ಸಂಸ್ಕೃತೀಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾ ತಂಡವು ಭಾಗ ವಹಿಸಿ ನಮ್ಮ ಸಂಸ್ಕೃತೀಕಿಯನ್ನು ದೇಶಾದ್ಯಂತ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತಿಚಿಗಷ್ಟೇ ನಡೆದ ಮೈಸೂರು ದಸರಾ ಸಂಸ್ಕೃತೀಕ ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ತಾಲೂಕಿನ ಯರಝರಿ ಗ್ರಾಮದ ಕಲಾ ತಂಡ ಭಾಗ ವಹಿಸಿದ್ದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದರು.

ಕನ್ನನಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಶಾಲಾ ಆಡಳಿತ ಮಂಡಳಿಯ ಸದಸ್ಯರು ನಂತರ 2025-26ನೇ ಸಾಲಿನ ಶಾಲಾ ವಾರ್ಷಿಕ ಕ್ರೀಡಾಕೂಟದ ಧ್ವಜಾರೋಹಣವನ್ನು ಸಂಸ್ಥೆ ಅಧ್ಯಕ್ಷ ಸುಧೀರ ನಾವದಗಿ ನೆರವೇರಿಸಿದರು. ಶಾಲೆಯ ದೈಹಿಕ ಶಿಕ್ಷಕ ರಾಮನಗೌಡ ಬಿರಾದಾರ ಅವರು ಕ್ರೀಡಾಕೂಟದ ಪ್ರತಿಜ್ಞಾವೊ ವಿಧಿ ಸ್ವೀಕಾರವನ್ನು ನೆರೆವೇರಿಸಿದರು.

ಪತಸಂಚಲನ:

ಪ್ರಾರ್ಥನಾ ವಿದ್ಯಾ ಮಂದಿರ ಶಾಲಾ ಮಕ್ಕಳಿಂದ ಆಕರ್ಷಕ ಪತಸಂಚಲನವನ್ನು ನಡೆಸಲಾಯಿತು. ಶಾಲೆಯಲ್ಲಿ ಕೆಂಪು, ಹಸಿರು, ನೀಲಿ ಸೇರಿ ಒಟ್ಟು 3 ತಂಡಗಳು ಪತಸಂಚಲನದಲ್ಲಿ ಭಾಗವಹಿಸಿದ್ದವು. ನಂತರ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ರೇವಪ್ಪ ಮೋಟಗಿ, ಕಾರ್ಯದರ್ಶಿ ನಿಂಗಣ್ಣ ಚಟ್ಟೇರ, ಸದಸ್ಯರಾದ ಜಗದೀಶ ಕಂಠಿ, ಗುರುಶಾಂತಪ್ಪ ಜೋಳದ, ರುದ್ರಪ್ಪ ಕಡಿ, ಪ್ರವೀಣ ನಾಗಠಾಣ, ನಿರ್ಮಲಾ ರಾಂಪೂರ, ವಿಜಯಪಕ್ಷ್ಲೀ ಗಡೇದ, ಮುಖ್ಯಗುರುಗಳಾದ ವಿನೋಧ ಪಟಗಾರ, ದಿವ್ಯಾ ಹೆಬ್ಬಾರ ಇದ್ದರು.

ಹೆಚ್ಚಿನ ಸುದ್ದಿ